ರಂಗನಾಥಪುರದಲ್ಲಿ ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯದ ಉಚಿತ ಆರೋಗ್ಯ ಶಿಬಿರ
- Shakti Prasad
- Jul 30, 2025
- 1 min read

ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯು ಹಿರಿಯೂರು ತಾಲ್ಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರ, ರಂಗನಾಥಪುರ ಇವರ ಸಹಯೋಗದೊಂದಿಗೆ ಜುಲೈ 30, 2025 ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು. ಈ ಶಿಬಿರದಲ್ಲಿ ತೆಗೆದ ಆಯ್ದ ಚಿತ್ರಗಳು ಇಲ್ಲಿವೆ.
ಶಿಬಿರದಲ್ಲಿ ಒದಗಿಸಲಾದ ಸೇವೆಗಳು
ಬಸವೇಶ್ವರ ವೈದ್ಯರ ತಂಡವು ಈ ಶಿಬಿರದಲ್ಲಿ ಸಾರ್ವಜನಿಕರಿಗೆ ಸಾಮಾನ್ಯ ವೈದ್ಯಕೀಯ ಸಮಸ್ಯೆಗಳಾದ ಸಕ್ಕರೆ ಕಾಯಿಲೆ, ರಕ್ತದೊತ್ತಡ (ಬಿಪಿ), ಆಯಾಸ, ಉಬ್ಬಸ, ಹರ್ನಿಯಾ, ಅಪೆಂಡಿಸೈಟಿಸ್, ಪೈಲ್ಸ್ ನಂತಹ ಶಸ್ತ್ರಚಿಕಿತ್ಸೆ ಅಗತ್ಯವಿರುವ ಕಾಯಿಲೆಗಳು, ಸ್ತ್ರೀ ರೋಗ ತೊಂದರೆಗಳು, ಮತ್ತು ಕಣ್ಣಿನ ತೊಂದರೆಗಳ ಉಚಿತ ತಪಾಸಣೆಯನ್ನು ನಡೆಸಿತು. ಅಲ್ಲದೆ, ಹೆಚ್ಚಿನ ಚಿಕಿತ್ಸೆಯ ಅಗತ್ಯವಿರುವ ರೋಗಿಗಳಿಗೆ ಸೂಕ್ತ ಅರಿವು ಮೂಡಿಸಲಾಯಿತು.
ಕಾರ್ಯಕ್ರಮದ ಮುಖ್ಯ ಉದ್ದೇಶಗಳು
ಹೆಚ್ಚಿನ ತಪಾಸಣೆ ಮತ್ತು ಅಗತ್ಯ ಚಿಕಿತ್ಸೆಯನ್ನು ಒದಗಿಸುವುದು.
ಆರೋಗ್ಯ ಮತ್ತು ಪೋಷಣೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು.
ಮುಂದಿನ ಶಿಬಿರಗಳು
ಈ ಉಚಿತ ತಪಾಸಣಾ ಶಿಬಿರಗಳು ಜುಲೈ ತಿಂಗಳಲ್ಲಿ ವಿವಿಧ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ಉಪಕೇಂದ್ರಗಳಲ್ಲಿ ನಡೆಯಲಿವೆ. ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ವೈದ್ಯಕೀಯ ತಜ್ಞರು ಈ ಎಲ್ಲಾ ಶಿಬಿರಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲಿದ್ದಾರೆ.
ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಚಿತ್ರದುರ್ಗ.











Jag noterar att artikeln bibehåller metodologisk koherens genom hela texten. Terminologi används med precision. Webbplatsen ger ytterligare kontextuell information om problemet. Systemisk förståelse förbättras med hänvisningar till interaktiva digitala modeller.